
ಪ್ರವಾಸ ಪ್ಯಾಕೇಜ್-10: ಹಾಸನ-ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ-ಬಾಣಾವರ ಕೋಟೆ
ಆರಂಭದ ಹಂತ:
|
ನಗರ ಬಸ್ ನಿಲ್ದಾಣ, ಹಾಸನ
|
| ಅಂತ್ಯ ಹಂತ: | ನಗರ ಬಸ್ ನಿಲ್ದಾಣ, ಹಾಸನ |
| ಪ್ರವಾಸದ ವಿಷಯ: | ಪ್ರಕೃತಿ / ಪರಂಪರೆಯ ಅನುಭವ |
| ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು |
ಪ್ರವಾಸಿ ಮಾರ್ಗದರ್ಶಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ |
| ಕೆಎಸ್ಆರ್ಟಿಸಿ ದರ: |
ವಯಸ್ಕರಿಗೆ : ರೂ.500.00 ಮಕ್ಕಳು (12 ವರ್ಷದೊಳಗೆ) : ರೂ.400.00 |
ಆಫ್ಲೈನ್ ಬುಕಿಂಗ್ |
1.ನಗರದ ಹಳೇ ಬಸ್ ನಿಲ್ದಾಣ, ಹಾಸನ 2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ 3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್, ವಿವೇಕಾನಂದ ಶಾಲೆ ಹತ್ತಿರ, ಹಾಸನ |
|
www.ksrtc.in |
ವಿವರವಾದ ವೇಳಾಪಟ್ಟಿ
ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, ಜಾವಗಲ್:
- ಬೆಳಿಗ್ಗೆ 07.30ಕ್ಕೆ – ಜಾವಗಲ್ನ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (41 ಕಿ.ಮೀ)
- ಬೆಳಿಗ್ಗೆ 09.30ಕ್ಕೆ – ಜಾವಗಲ್ನ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನವನ್ನು ಕ್ರಿ.ಶ. 1250-1260 ರ ಅವಧಿಯಲ್ಲಿ ಹೊಯ್ಸಳ ರಾಜ ಸೋಮೇಶ್ವರನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು
ಶ್ರೀ.ಚನ್ನಕೇಶವ ದೇವಸ್ಥಾನ, ಅರಕೆರೆ:
- ಬೆಳಿಗ್ಗೆ 10.00ಕ್ಕೆ – ಅರಕೆರೆಯ ಶ್ರೀ.ಚನ್ನಕೇಶವ ದೇವಸ್ಥಾನಕ್ಕೆ ನಿರ್ಗಮನ (13 ಕಿ.ಮೀ)
- ಬೆಳಿಗ್ಗೆ 10.20ಕ್ಕೆ – ಶ್ರೀ.ಚನ್ನಕೇಶವ ದೇವಸ್ಥಾನ, ಅರಕೆರೆಗೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಈ ದೇವಾಲಯವನ್ನು 13 ನೇ ಶತಮಾನದಲ್ಲಿ ಹೊಯ್ಸಳ ಆಳ್ವಿಕೆಯ ನಂತರ ನಿರ್ಮಿಸಲಾಯಿತು.
ಮುಖಮಂಟಪ (ಪ್ರವೇಶ ಮಂಟಪ) ಹೊಂದಿರುವ ಸಾಮಾನ್ಯ ನವಗ್ರಹ (ಸಭಾಂಗಣ)ಕ್ಕೆ ತೆರೆದುಕೊಳ್ಳುವ ತ್ರಿಕೂಟ (ಮೂರು ದೇವಾಲಯಗಳು) ವಿನ್ಯಾಸ ಹೊಂದಿದೆ.
- ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯಡಿಯಲ್ಲಿ ಸಂರಕ್ಷಿಸಲಾಗಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು
ರಂಗನಾಥಸ್ವಾಮಿ ದೇವಸ್ಥಾನ, ಬೆಟ್ಟದಪುರ
- ಬೆಳಿಗ್ಗೆ 11.05ಕ್ಕೆ – ಬೆಟ್ಟದಪುರದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (11 ಕಿ.ಮೀ)
- ಬೆಳಿಗ್ಗೆ 11.25ಕ್ಕೆ– ಬೆಟ್ಟದಪುರದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಬೆಟ್ಟದಪುರದ ಸುಂದರವಾದ ಬೆಟ್ಟದ ಮೇಲೆ ಈ ದೇವಸ್ಥಾನ ನೆಲೆಸಿದೆ.
- ದೇವಾಲಯವು ವಿಷ್ಣುವಿನ ಅವತಾರವಾದ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಮರ್ಪಿತವಾಗಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 35 ನಿಮಿಷಗಳು
ಬಾಣಾವರದ ಕೋಟೆ ಸಂಕೀರ್ಣ:
- ಮಧ್ಯಾಹ್ನ 12.00ಕ್ಕೆ – ಬಾಣಾವರದ ಕೋಟೆ ಸಂಕೀರ್ಣಕ್ಕೆ ನಿರ್ಗಮನ (18 ಕಿ.ಮೀ)
- ಮಧ್ಯಾಹ್ನ 12.25ಕ್ಕೆ – ಬಾಣಾವರದ ಕೋಟೆ ಸಂಕೀರ್ಣಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಪಾಳೇಗಾರರ ಆಳ್ವಿಕೆಯಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಉಲ್ಲೇಖವಿದೆ. ವಸಾಹತು ಮತ್ತು ಹತ್ತಿರದ ವ್ಯಾಪಾರ ಮಾರ್ಗಗಳನ್ನು ರಕ್ಷಿಸಲು ರಕ್ಷಣಾತ್ಮಕ ಕೋಟೆಯಾಗಿ ಕಾರ್ಯನಿರ್ವಹಿಸಿತು ಎಂದು ಉಲ್ಲೇಖಿಸಲಾಗಿದೆ.
- ಕೋಟೆ ಸಂಕೀರ್ಣವು ಕೋಟೆ ಆಂಜನೇಯ, ನರಸಿಂಹಸ್ವಾಮಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ರಂಗನಾಥಸ್ವಾಮಿ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ಮುಂತಾದ ಐತಿಹಾಸಿಕ ಮತ್ತು ಪ್ರಾಚೀನ ದೇವಾಲಯಗಳನ್ನು ಒಳಗೊಂಡಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 50 ನಿಮಿಷಗಳು
ಮಧ್ಯಾಹ್ನ 01.15 – 02.15 ಬಾಣಾವರದ ಖಾಸಗಿ ಹೋಟೆಲ್ ಊಟ [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]
ರಂಗನಾಥಸ್ವಾಮಿ ದೇವಸ್ಥಾನ, ಬಿಳಿಕಲ್ಲು
- ಮಧ್ಯಾಹ್ನ 02.15ಕ್ಕೆ – ಬಿಳಿಕಲ್ಲು ರಂಗನಾಥಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (30 ಕಿ.ಮೀ)
- ಮಧ್ಯಾಹ್ನ 03.00ಕ್ಕೆ – ಬಿಳಿಕಲ್ಲು ರಂಗನಾಥಸ್ವಾಮಿ ದೇವಸ್ಥಾನಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ದೇವಾಲಯವನ್ನು ಭಗವಾನ್ ರಂಗನಾಥ (ವಿಷ್ಣುವಿನ ರೂಪ)ಕ್ಕೆ ಸಮರ್ಪಿಸಲಾಗಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು
ಪುರಾತತ್ವ ವಸ್ತು ಸಂಗ್ರಹಾಲಯ,ಹಾಸನ
- ಮಧ್ಯಾಹ್ನ 03.45ಕ್ಕೆ- ಹಾಸನದ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ನಿರ್ಗಮನ 65 ಕಿ.ಮೀ
- ಸಂಜೆ 05.45ಕ್ಕೆ – ಹಾಸನದ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ಆಗಮನ
ಒಟ್ಟು ಪ್ರಯಾಣ : 177 ಕಿ.ಮೀ.