
ಪ್ರವಾಸ ಪ್ಯಾಕೇಜ್-07: ಹಾಸನ-ಶ್ರವಣಬೆಳಗೊಳ-ಬೆಲಸಿಂದ ಪಾರ್ಕ್
ಆರಂಭದ ಹಂತ:
|
ನಗರ ಬಸ್ ನಿಲ್ದಾಣ, ಹಾಸನ
|
| ಅಂತ್ಯ ಹಂತ: | ನಗರ ಬಸ್ ನಿಲ್ದಾಣ, ಹಾಸನ |
| ಪ್ರವಾಸದ ವಿಷಯ: | ಪ್ರಕೃತಿ / ಪರಂಪರೆಯ ಅನುಭವ |
| ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು |
ಪ್ರವಾಸಿ ಮಾರ್ಗದರ್ಶಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ |
| ಕೆಎಸ್ಆರ್ಟಿಸಿ ದರ: |
ವಯಸ್ಕರಿಗೆ : ರೂ.400.00 ಮಕ್ಕಳು (12 ವರ್ಷದೊಳಗೆ) : ರೂ.300.00 |
ಆಫ್ಲೈನ್ ಬುಕಿಂಗ್ |
1.ನಗರದ ಹಳೇ ಬಸ್ ನಿಲ್ದಾಣ, ಹಾಸನ 2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ 3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್, ವಿವೇಕಾನಂದ ಶಾಲೆ ಹತ್ತಿರ,ಹಾಸನ |
|
www.ksrtc.in |
ವಿವರವಾದ ವೇಳಾಪಟ್ಟಿ
ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, ನುಗ್ಗೇಹಳ್ಳಿ:
- ಬೆಳಿಗ್ಗೆ 07.30ಕ್ಕೆ – ನುಗ್ಗೇಹಳ್ಳಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (54 ಕಿ.ಮೀ)
- ಬೆಳಿಗ್ಗೆ 10.00ಕ್ಕೆ – ನುಗ್ಗೇಹಳ್ಳಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಕ್ರಿ.ಶ. 1246 ರಲ್ಲಿ ಹೊಯ್ಸಳ ರಾಜ ವೀರಸೋಮೇಶ್ವರನ ಆಳ್ವಿಯ ಸಂದರ್ಭದಲ್ಲಿ ಬೊಮ್ಮಣ್ಣ ದಂಡನಾಯಕ ನಿರ್ಮಿಸಿದನು ಎಂದು ಉಲ್ಲೇಖಿಸಲಾಗಿದೆ.
- ಇದನ್ನು ಹೊಯ್ಸಳ ತ್ರಿಕೂಟ (ಮೂರು ಗರ್ಭಗುಡಿ) ಶೈಲಿಯಲ್ಲಿ ನಿರ್ಮಿಸಲಾಗಿದೆ – ಕೇಶವ (ಪಶ್ಚಿಮ), ಲಕ್ಷ್ಮಿ
ನರಸಿಂಹ (ಉತ್ತರ) ಮತ್ತು ವೇಣುಗೋಪಾಲ (ದಕ್ಷಿಣ) ಗೆ ಸಮರ್ಪಿಸಲಾಗಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು
ಶ್ರವಣಬೆಳಗೊಳ (ವಿಂದ್ಯಗಿರಿ ಬೆಟ್ಟ):
- ಬೆಳಿಗ್ಗೆ 10.30ಕ್ಕೆ – ಶ್ರವಣಬೆಳಗೊಳಕ್ಕೆ ನಿರ್ಗಮನ (ವಿಂದ್ಯಗಿರಿ ಬೆಟ್ಟ)
- ಬೆಳಿಗ್ಗೆ 11.15ಕ್ಕೆ – ಶ್ರವಣಬೆಳಗೊಳಕ್ಕೆ (ವಿಂದ್ಯಗಿರಿ ಬೆಟ್ಟ) ಆಗಮನ
ಪ್ರವಾಸಿ ತಾಣದ ಮಾಹಿತಿ:
- ಗೋಮಟೇಶ್ವರ ಬಾಹುಬಲಿಯ 57 ಅಡಿ ಎತ್ತರದ ಏಕಶಿಲೆಯ ಪ್ರತಿಮೆಗೆ ಪ್ರಸಿದ್ಧಿಯಾಗಿದೆ.
- ವಿಶ್ವದ ಅತಿದೊಡ್ಡ ಏಕಶಿಲೆಯ ಪ್ರತಿಮೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ (ಒಂದೇ ಕಲ್ಲಿನಿಂದ ಕೆತ್ತಲಾಗಿದೆ)
- ಬಾಹುಬಲಿ ಪ್ರತಿಮೆಯನ್ನು ಕ್ರಿ.ಶ. 981 ರಲ್ಲಿ ಗಂಗಾ ರಾಜವಂಶದ ಮಂತ್ರಿ ಚಾಮುಂಡರಾಯರು ಸ್ಥಾಪಿಸಿದರು.
- ಸುತ್ತಮುತ್ತಲಿನ ಸ್ಥಳವು ಶ್ರವಣಬೆಳಗೊಳ ಪಟ್ಟಣ ಮತ್ತು ಚಂದ್ರಗಿರಿ ಬೆಟ್ಟದ ವಿಹಂಗಮ ನೋಟವನ್ನು ಸವಿಯಬಹುದು.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 02 ಗಂಟೆಗಳು
ಮಧ್ಯಾಹ್ನ 01.15 – ಮಧ್ಯಾಹ್ನ 2.15 ಶ್ರೀ ಜೈನ ಮಠದಲ್ಲಿ ಉಚಿತ ದಾಸೋಹ
ಶ್ರವಣಬೆಳಗೊಳ (ಚಂದ್ರಗಿರಿ ಬೆಟ್ಟ):
- ಮಧ್ಯಾಹ್ನ 02.15ಕ್ಕೆ – ಚಂದ್ರಗಿರಿ ಬೆಟ್ಟಕ್ಕೆ ನಿರ್ಗಮನ (500 ಮೀಟರ್)
- ಮಧ್ಯಾಹ್ನ 02.25ಕ್ಕೆ – ಚಂದ್ರಗಿರಿ ಬೆಟ್ಟಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ವಿಂದ್ಯಗಿರಿ ಬೆಟ್ಟದ ಎದುರು ಇದೆ.
- ಜೈನ ಸನ್ಯಾಸಿಗಳಿಗೆ ಅರ್ಪಿಸಲಾದ ಹಲವಾರು ಜೈನ ಬಸದಿಗಳು (ದೇವಾಲಯಗಳು) ಮತ್ತು ಸ್ಮಾರಕಗಳು ಇಲ್ಲಿವೆ.
- ಜೈನಮುನಿ ಭದ್ರಬಾಹು ಜೊತೆ ಸಂಬಂಧ ಹೊಂದಿದ್ದು, ಅವರು ತಮ್ಮ ಶಿಷ್ಯರೊಂದಿಗೆ ಇಲ್ಲಿ ಧ್ಯಾನ ಮಾಡಿದ್ದರು. ಚಂದ್ರಗುಪ್ತ ಬಸದಿ, ಪಾಶ್ವನಾಥ ಬಸದಿ, ಶಾಂತಿನಾಥ ಬಸದಿ ಇತ್ಯಾದಿ ಸೇರಿದಂತೆ ಸುಮಾರು 14 ದೇವಾಲಯಗಳಿವೆ.
- ಮೇಲ್ಭಾಗವನ್ನು ತಲುಪಲು 200-250 ಮೆಟ್ಟಿಲುಗಳ ಹತ್ತಬೇಕಾಗುತ್ತದೆ. ಶ್ರವಣಬೆಳಗೊಳ ಪಟ್ಟಣ ಮತ್ತು ವಿಂದ್ಯಗಿರಿ ಬೆಟ್ಟದ ವಿಹಂಗಮ ನೋಟವನ್ನು ಆನಂದಿಸಬಹುದು. ಜೈನ ಯಾತ್ರಿಕರಿಗೆ ಪ್ರಮುಖ ತಾಣವಾಗಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01.35 ಗಂಟೆಗಳು
ಬೆಲಸಿಂದ ಉದ್ಯಾನವನ:
- ಮಧ್ಯಾಹ್ನ 04.00ಕ್ಕೆ – ಚನ್ನರಾಯಪಟ್ಟಣದ ಬೆಲಸಿಂದ ಉದ್ಯಾನವನಕ್ಕೆ ನಿರ್ಗಮನ (15 ಕಿ.ಮೀ)
- ಮಧ್ಯಾಹ್ನ 04.30ಕ್ಕೆ – ಬೆಲಸಿಂದ ಉದ್ಯಾನವನಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಹಸಿರು ಗ್ರಂಥಾಲಯ, ವಿಶಾಲವಾದ ಪ್ರಕೃತಿ ವನ, ನಡಿಗೆ ಮಾರ್ಗಗಳು ಮತ್ತು ದೋಣಿ ವಿಹಾರವನ್ನು ಆನಂದಿಸಬಹುದಾಗಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 1.30 ಗಂಟೆ
ಸಂಜೆ 06.00ಕ್ಕೆ – ಹಾಸನಕ್ಕೆ ನಿರ್ಗಮನ (34 ಕಿ.ಮೀ)
ಒಟ್ಟು ಪ್ರಯಾಣ– 131.5 ಕಿ.ಮೀ.