
ಪ್ರವಾಸ ಪ್ಯಾಕೇಜ್-04: ಹಾಸನ-ವಾಟೆಹೊಳೆ ಅಣೆಕಟ್ಟು-ಬೆಟ್ಟದ ಭೈರವೇಶ್ವರ ದೇವಸ್ಥಾನ
ಆರಂಭದ ಹಂತ:
|
ನಗರ ಬಸ್ ನಿಲ್ದಾಣ, ಹಾಸನ
|
| ಅಂತ್ಯ ಹಂತ: | ನಗರ ಬಸ್ ನಿಲ್ದಾಣ, ಹಾಸನ |
| ಪ್ರವಾಸದ ವಿಷಯ: | ಪ್ರಕೃತಿ / ಪರಂಪರೆಯ ಅನುಭವ |
| ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳು |
ಪ್ರವಾಸಿ ಮಾರ್ಗದರ್ಶಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರರೊಂದಿಗೆ ಆರಾಮದಾಯಕ ಪ್ರಯಾಣ |
| ಕೆಎಸ್ಆರ್ಟಿಸಿ ದರ: |
ವಯಸ್ಕರಿಗೆ : ರೂ.500.00 ಮಕ್ಕಳು (12 ವರ್ಷದೊಳಗೆ) : ರೂ.400.00 |
ಆಫ್ಲೈನ್ ಬುಕಿಂಗ್ |
1.ನಗರದ ಹಳೇ ಬಸ್ ನಿಲ್ದಾಣ, ಹಾಸನ 2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ 3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್,ವಿವೇಕಾನಂದ ಶಾಲೆ ಹತ್ತಿರ, ಹಾಸನ |
|
www.ksrtc.in |
ವಿವರವಾದ ವೇಳಾಪಟ್ಟಿ
ವಾಟೆಹೊಳೆ ಡ್ಯಾಮ್
- ಬೆಳಿಗ್ಗೆ 07.30ಕ್ಕೆ – ವಾಟೆಹೊಳೆ ಡ್ಯಾಮ್ಗೆ ನಿರ್ಗಮನ (34 ಕಿ.ಮೀ)
- ಬೆಳಿಗ್ಗೆ 08.45ಕ್ಕೆ – ವಾಟೆಹೊಳೆ ಡ್ಯಾಮ್ಗೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ವಾಟೆಹೊಳೆ ಡ್ಯಾಮ್ ಅನ್ನು 1984 ರಲ್ಲಿ ನಿರ್ಮಿಸಲಾಗಿದೆ.
- ಜಲಾನಯನ ಪ್ರದೇಶ – 11 ಹೆಕ್ಟೇರ್
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು
ಶ್ರೀ ಜನಾರ್ದನಸ್ವಾಮಿ ದೇವಸ್ಥಾನ, ಪಾಳ್ಯ (ಆಲೂರು)
- ಬೆಳಿಗ್ಗೆ 09.15ಕ್ಕೆ – ಪಾಳ್ಯ ಜನಾರ್ದನಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ (21 ಕಿ.ಮೀ)
- ಬೆಳಿಗ್ಗೆ 09.45ಕ್ಕೆ – ಪಾಳ್ಯ ಜನಾರ್ದನಸ್ವಾಮಿ ದೇವಸ್ಥಾನಕ್ಕೆ ದೇವಸ್ಥಾನಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿದೆ.
- ಹೊಯ್ಸಳರ ಕಾಲದ ವಾಸ್ತುಶಿಲ್ಪ ಹೊಂದಿದೆ.
- ವಿಷ್ಣುವಿಗೆ ಸಮರ್ಪಿತವಾದ ಜನಾರ್ದನಸ್ವಾಮಿ ರೂಪದ ದೇವಾಲಯ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು
ಮರಗಡಿ ಜಲಪಾತ:
- ಬೆಳಿಗ್ಗೆ 10.15ಕ್ಕೆ – ಮರಗಡಿ ಜಲಪಾತಕ್ಕೆ ನಿರ್ಗಮನ (ಅಬ್ಬಿ ಜಲಪಾತ) (41 ಕಿ.ಮೀ)
- ಮಧ್ಯಾಹ್ನ 12.15ಕ್ಕೆ – ಮರಗಡಿ ಜಲಪಾತಕ್ಕೆ ಆಗಮನ (ಅಬ್ಬಿ ಜಲಪಾತ)
ಪ್ರವಾಸಿ ತಾಣದ ಮಾಹಿತಿ:
- ಮರಗಡಿ ಜಲಪಾತವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಶಾಂತವಾದ ಜಲಪಾತವಾಗಿದ್ದು, ಕಾಫಿ ತೋಟ ಮತ್ತು ದಟ್ಟವಾದ ಹಸಿರಿನಿಂದ ಆವೃತವಾಗಿದೆ.
- ವಿಶೇಷವಾಗಿ ಮಳೆಗಾಲದಲ್ಲಿ ವೀಕ್ಷಣೆಗೆ ಸೂಕ್ತವಾಗಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 01:00 ಗಂಟೆ
ಮಧ್ಯಾಹ್ನ 01:15- ಮಧ್ಯಾಹ್ನ 02:00ರ ವರೆಗೆ ಮರಗಡಿ ಜಲಪಾತ ಬಳಿ ಖಾಸಗಿ ಹೋಟೆಲ್ನಲ್ಲಿ ಊಟದ ವ್ಯವಸ್ಥೆ [ಪ್ರಯಾಣಿಕರು ಊಟಕ್ಕೆ ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]
ಬೆಟ್ಟದ ಭೈರವೇಶ್ವರ ದೇವಸ್ಥಾನ:
- ಮಧ್ಯಾಹ್ನ 02.00ಕ್ಕೆ – ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ನಿರ್ಗಮನ (13 ಕಿ.ಮೀ)
- ಮಧ್ಯಾಹ್ನ 02.30ಕ್ಕೆ – ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಪ್ರಾಚೀನ ಕಾಲದ ಬೆಟ್ಟದ ಭೈರವೇಶ್ವರ ದೇವಸ್ಥಾನವು ಭಗವಾನ್ ಭೈರವನಿಗೆ ಸಮರ್ಪಿತವಾಗಿದೆ. ಇದು ಸಕಲೇಶಪುರದ ರಮಣೀಯ ಬೆಟ್ಟಗಳ ನಡುವೆ ಇರುವ ಶಿವನ ದೇವಾಲಯವಾಗಿದೆ.
- ಇದು ಹಚ್ಚ ಹಸಿರಿನ ಕಾಡುಗಳಿಂದ ಆವೃತವಾಗಿದ್ದು, ಪಶ್ಚಿಮ ಘಟ್ಟಗಳ ವಿಹಂಗಮ ನೋಟಗಳನ್ನು ನೀಡುವ ಈ ದೇವಾಲಯವು ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ.
- ಇದರ ಪ್ರಶಾಂತ ವಾತಾವರಣ ಮತ್ತು ಸಾಂಪ್ರದಾಯಿಕ ವಾಸ್ತುಶಿಲ್ಪವು ಧಾರ್ಮಿಕ ಭಕ್ತರು ಮತ್ತು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 02.00 ಗಂಟೆ
ಸಂಜೆ 04.30ಕ್ಕೆ – ಹಾಸನಕ್ಕೆ ನಿರ್ಗಮನ (73 ಕಿ.ಮೀ)
ಒಟ್ಟು ಪ್ರಯಾಣ–182 ಕಿ.ಮೀ.